ಮನೆಂದ ಎಲ್ಲಿಗಾರ್ ಹೋಕನ ಎಲ್ಲಿಗೆ ಹೋದುಂತ ಕೇಳಕ್ಕಾಗದ್, ಕಾಲಿ ಬಿಂದಿಗೆ ನೋಡಕ್ಕಾಗದ್ಂತ ಅಜ್ಜಿಕ ಪಿಳ್ಳಿಕ್ಕಳ್ಗೆ ಹೇಳ್ತಾ ಇದ್ದವೆ. ನಾವೆಲ್ಲ ವಿಜ್ಞಾನ ಓದಿದವ್, ಇದ್ ಮೂಡನಂಬಿಕೆತ ಹೇಳಿ ಮಕ್ಕ ಅಜ್ಜಿಕ ಹೇಳ್ದುನ್ನ ಉದಾಸೀನ ಮಾಡಿ ನೆಗಾಡುವೆ! ಅಜ್ಜಿಕ ಹೇಳ್ದು ಪಿಳ್ಳಿಗಳ ಒಳ್ಳೆದಿಕ್ಕೆ.
ವಿಜ್ಞಾನದ್ ಅರ್ಥ ಏನ್ತ ಕೇಳಿರೆ, ಅಣುಗಳ ಜ್ಞಾನ ಪಡಿಯೊದ್ವಿಜ್ಞಾನಂತ ವಿಜ್ಞಾನಿಗ ಹೇಳ್ವೆ. ಅದೇ ಪ್ರಶ್ನೆನ ತತ್ವಜ್ಞಾನಿಗಳ್ಗೆ ಕೇಳಿರೆ ವಿಷ್ಣುಭಗವಾನ್ದ್ ಜ್ಞಾನ ಪಡಿಯದು ವಿಜ್ಞಾನಂತ ಅವ್ಹೇಳ್ವೆ! ಅಣುಗಳ ಜ್ಞಾನ ಪಡಿಯುವ ವಿಜ್ಞಾನ ವಸ್ತು ವಿಜ್ಞಾನ. ಶ್ರೀಮಹಾವಿಷ್ಣುದ್ ಜ್ಞಾನ ಪಡಿಯುವ ವಿಜ್ಞಾನ ಆಧ್ಯಾತ್ಮ ವಿಜ್ಞಾನ. ಇವ್ ಎರ್ಡ್ ವಿಜ್ಞಾನಗ ಒಂದಾದರೆ ಮಾತ್ರ ಅದ್ ನಿಜಾದ ವಿಜ್ಞಾನ ಆದೆ. ವಸ್ತು ವಿಜ್ಞಾನದ್ ಕಟ್ಟಡನ ಆಧ್ಯಾತ್ಮ ವಿಜ್ಞಾನದ ತಳಪಾಯ ಮೇಲೆ ಕಟ್ಟಿರೆ ಮಾತ್ರ ಕಟ್ಟಡ ಬಿಗಿಯಾಗಿ ನಿಲ್ಲುದು.
ವಸ್ತು ವಿಜ್ಞಾನನ ಯಂತ್ರಗಳ್ಂದ ತಿಳ್ಕಣಕ್ಕ್. ಆಧ್ಯಾತ್ಮ ವಿಜ್ಞಾನನ ಮಂತ್ರಗಳ್ಂದ ತಿಳ್ಕಣಕ್ಕ್. ವಸ್ತು ವಿಜ್ಞಾನ ಇಂಟರ್ನೆಟ್ ಸಂಪರ್ಕ ಇಲ್ಲದ ಕಂಪ್ಯೂಟರ್ ತರ. ಆಧ್ಯಾತ್ಮ ವಿಜ್ಞಾನ ಇಂಟರ್ ನೆಟ್ ಸಂಪರ್ಕ ಇರುವ ಕಂಪ್ಯೂಟರ್ ತರ. ನಮ್ಮ ಪೂರ್ವ ಕಾಲದ ಋಷಿಮುನಿಗ “ಶಕ್ತಿ ಹಸ್ತಾಯ ವಿಧ್ಮಹೇ ಭೂಮಿ ಪುತ್ರಾಯ ಧೀಮಹೀ ತನ್ನೊ ಅಂಗಾರಕ ಪ್ರಚೋದಯಾತ್”.ತ ಮಂಗಳ ಗ್ರಹಕ್ಕೆ ಸಂಬಂದಪಟ್ಟ ಒಂದ್ ಗಾಯತ್ರಿ ಮಂತ್ರನ ಬರ್ದ್ ಮಡಿಗಿಯೋಳೊ. ಅವ್ ಮಂಗಳ ಗ್ರಹನ ಭೂಮಿದ್ ಪುತ್ರ ಅಂದರೆ ಭೂಮಿದ್ ಮಂಙಂತ ಹೇಳಿದ್ದೊ. ನಾಸಾದ ಕ್ಯೂರಿಯಾಸಿಟಿ ರೋವರ್ ನೌಕೆ ಮಂಗಳಗ್ರಹಲಿ ಇಳ್ದ್ ಪರೀಕ್ಷೆ ಮಾಡಿಕನ ಅಲ್ಲಿ “ಪರ್ಸೀವರೆನ್ಸ್ ವ್ಯಾಲಿ”ತೇಳುವ ಜಾಗಲಿರುವ ಕಲ್ಲ್ದ್ ಹಾಳೆಗ ಭೂಮಿಲಿ ಇರುವ ಕಾಗೆಬಂಗಾರಕ್ಕೆ ಹೋಲಿಕೆ ಆದೆಂತ ಹೇಳಿಯೋಳೊ. ಇಂತ ಹೋಲಿಕೆಗ ಎಷ್ಟೋ ಇರುವೊ. ಋಷಿಮುನಿಗ ಇಂತ ಸಂಗತಿಗಳ್ನ ತಮ್ಮ ತಪಸ್ ಶಕ್ತಿಂದ, ಅಂದರೆ ಆಧ್ಯಾತ್ಮ ವಿಜ್ಞಾನಂದ ತಿಳ್ಕಂಡಿದ್ದೊ ಮತ್ತೆ ಅಂತ ಹೋಲಿಕೆ ಇರ್ದರ್ಂದ ಮಂಗಳ ಗ್ರಹನ ಭೂಮಿದ್ ಮಂಙಂತ ಹೇಳಿದ್ದೊ.
ಹಗ್ಲ್ ನಕ್ಷತ್ರಗ ಕಾಂಬದುಲ್ಲೆತೇಳಿರೆ ನಕ್ಷತ್ರಗ ಇಲ್ಲೆಂತ ಹೇಳುದ್ ಎಷ್ಟು ತಪ್ಪೊ, ಹಂಗೆ ನಮ್ಮ ಅಜ್ಜಿಕ ಹೇಳುವ ಸಂಗತಿಗಳ ಕಾರಣ ಗೊತ್ತಿಲ್ಲದೆ ಮೂಡನಂಬಿಕೆತ ಉದಾಸೀನಮಾಡಿ ನೆಗಾಡುದು ಅಷ್ಟೇ ತಪ್ಪು! ಇಂತ ಸಂಗತಿಗಳ್ಗೆ ವಸ್ತು ವಿಜ್ಞಾನಲಿ ಉತ್ತರ ಇಲ್ಲದಿದ್ದರೂ-ಆಧ್ಯಾತ್ಮ ವಿಜ್ಞಾನಲಿ ಉತ್ತರ ಉಟ್ಟು! ನಾವು ತಿಳ್ಕಣ್ಣುವ ತಂತ್ರನ ಕಲಿಯುವ ಮನ್ಸ್ ಮಾಡೊಕು ಅಷ್ಟೆ!
- ಚೆಂಗಪ್ಪ ಹೊಳೆಕರೆ